ಈ ದಿನಗಳಲ್ಲಿ ಶಾಖಾ ಅಂಚೆ ಕಛೇರಿಗಳ ಸೇವೆಯಲ್ಲಿ ವ್ಯತ್ಯಯ

WhatsApp status 1080x1920 px YouTube Thumbnail min

ಪುತ್ತೂರು: ಅಂಚೆ ಇಲಾಖೆ ಈಗಾಗಲೇ ಆಧುನಿಕತೆಯ ಹಾದಿಯಲ್ಲಿ ಸ್ಫರ್ಧಾತ್ಮಕವಾಗಿ ಬೆಳೆಯುತ್ತಿದೆ. ಅದರಲ್ಲೂ ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಾಖಾ ಅಂಚೆ ಕಛೇರಿಗಳು ಸಂಪೂರ್ಣವಾಗಿ ಡಿಜಿಟಲೀಕರಣಗೊಂಡು, ಜನರಿಗೆ ಕ್ಷಿಪ್ರ ಸೇವೆಯನ್ನು ಒದಗಿಸುತ್ತಿದೆ. ಆದರೆ ಇದೀಗ ಶಾಖಾ ಅಂಚೆ ಕಚೇರಿಯ ತಂತ್ರಜ್ಞಾನದಲ್ಲಿ ಮತ್ತೊಂದು ಮಹತ್ತರ ಬದಲಾವಣೆಯಾಗುತ್ತಿದ್ದು, ಹೊಸ ತಂತ್ರಾಂಶವೊಂದನ್ನು ಇದು ಅಳವಡಿಸಿಕೊಳ್ಳಲಿದೆ. ಈ ಸಂಬಂಧ ಏಪ್ರಿಲ್ 16.04.2024 ರಿಂದ 18.04.2024 ರವರೆಗೆ ಶಾಖಾ ಅಂಚೆ ಕಛೇರಿಗಳಲ್ಲಿ ಯಾವುದೇ ಸೇವೆಗಳು ಲಭ್ಯವಿಲ್ಲದಿರುವುದರಿಂದ ಗ್ರಾಹಕರು ಸಹರಿಸುವಂತೆ ಪುತ್ತೂರು ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ದೀನ್ ದಯಾಳ್ ಸ್ಪರ್ಶ ಸ್ಕಾಲರ್ ಶಿಪ್ | Deen Dayal SPARSH Yojana scholarship for students

Deen Dayal SPARSH Yojana

ಭಾರತೀಯ ಅಂಚೆ ಇಲಾಖೆಯು 6 ನೇ ತರಗತಿಯಿಂದ 9 ನೇ ತರಗತಿ ವರೆಗಿನ, ಎಲ್ಲಾ ಮಕ್ಕಳಿಗೆ ದೀನ್ ದಯಾಳ್ ಸ್ಪರ್ಶ ಯೋಜನಾ ಎಂಬ ಸ್ಕಾಲರ್ ಶಿಪ್ ಯೋಜನೆಯು,ಪ್ರತೀ ತಿಂಗಳಿಗೆ ರೂಪಾಯಿ 500/- ರಂತೆ 6000/- ಯನ್ನು ಜಾರಿಗೆ ತಂದಿದೆ .ಇದಕ್ಕೆ ಅರ್ಜಿ ಸಲ್ಲಿಸಲು1.) ವಿದ್ಯಾರ್ಥಿಗಳು ನಮ್ಮ ಇಲಾಖೆಯ ಯಾವುದೇ ಅಂಚೆ ಕಚೇರಿಯಲ್ಲಿ ಫಿಲಾಟಲಿ ಡೆಪಾಸಿಟ್ ( ಅಂಚೆ ಚೀಟಿ ಸಂಗ್ರಹಣಾ ಖಾತೆ) ಹೊಂದಿರಬೇಕು – ಅದರಲ್ಲಿ ಕನಿಷ್ಠ ಹಣ ಹೂಡಿಕೆ ರೂ. 400/- ಮಾತ್ರ . 2.) … Read more

ಪೋಸ್ಟ್ ಆಫೀಸ್ ನ ಈ ಯೋಜನೆ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ :ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ

png 20230629 145434 0000

ಯಾರು ಈ ಖಾತೆಯನ್ನು ತೆರೆಯಬಹುದು? ಈ ಯೋಜನೆಯಡಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಖಾತೆಯನ್ನು ತೆರೆಯಬಹುದು. ಯಾವುದೇ ವಯಸ್ಸಿನ ಹೆಣ್ಣು ಮಗು ತನ್ನ ತಂದೆ/ತಾಯಿ ಅಥವಾ ಕಾನೂನು ಬದ್ಧ ಪೋಷಕರ ಮೂಲಕ ಈ ಖಾತೆಯನ್ನು ತೆರೆಯಬಹುದು. ವಯಸ್ಸಿನ ನಿರ್ಬಂಧವಿಲ್ಲ. ಎಲ್ಲಿ ಈ ಖಾತೆಯನ್ನು ತೆರೆಯಬಹುದು? ನಿಮ್ಮ ಸಮೀಪದ ಯಾವುದೇ ಶಾಖಾ, ಉಪ ಅಥವಾ ಪ್ರಧಾನ ಅಂಚೆ ಕಛೇರಿಯಲ್ಲಿ ಈ ಖಾತೆಯನ್ನು ತೆರೆಯಬಹುದು. ಕನಿಷ್ಠ / ಗರಿಷ್ಠ ಮಿತಿಗಳು : ಕನಿಷ್ಠ ಠೇವಣಿ ರೂ. 1000/- ಗರಿಷ್ಠ ಠೇವಣಿ … Read more

ಪಾಣೆಮಂಗಳೂರು ಪೋಸ್ಟ್ ಆಫೀಸ್ ಬಿಲ್ಡಿಂಗ್ ನೂತನ ಕಟ್ಟಡಕ್ಕೆ ಸ್ಥಳಾಂತರ

Screenshot 2023 03 23 18 45 29 28 6012fa4d4ddec268fc5c7112cbb265e7

ಸರಕಾರದ ವತಿಯಿಂದ ನೀಡಲ್ಪಡುವ ಸಾರ್ವಜನಿಕ ಸೇವೆಯನ್ನು ನೀಡುತ್ತಿರುವ ಹಲವು ಇಲಾಖೆಗಳಲ್ಲಿ ಒಂದಾಗಿರುವ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಬರುವ ಪಾಣೆಮಂಗಳೂರು ಉಪ ಅಂಚೆ ಕಛೇರಿಯು ಇಂದು ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಈ ನೂತನ ಸ್ಥಳಾಂತರಗೊಂಡ ಅಂಚೆ ಕಛೇರಿಯನ್ನು, ಪುತ್ತೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್.) ರವರು ಉದ್ಘಾಟಿಸಿದರು. ಬಂಟ್ವಾಳ ಉಪವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಶ್ರೀ. ಲೋಕನಾಥ ಎಂ., ಕಂಪ್ಯೂಟರ್ ತಂತ್ರಜ್ನರಾದ ಶ್ರೀ. ನೂತನ್ ವೈ ಬಂಗೇರ, ಉಪ ಅಂಚೆ ಪಾಲಕರಾದ … Read more

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಅಂತರ ರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ 2023.

IMG 20230313 WA0068

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಅಂತರ ರಾಷ್ಟ್ರೀಯ ಪತ್ರ ಲೇಖನ ಸ್ಪರ್ಧೆ. 2023. ನಮ್ಮ ಯುವ ಜನತೆಗಾಗಿ Puttur Postal Division 2023 International Letter Writing Competition for Young People

ಪುತ್ತೂರು ಅಂಚೆ ವಿಭಾಗದಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ

IMG 20230309 WA0039

ಪುತ್ತೂರು: ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗೀಯ ಕಛೇರಿಯಲ್ಲಿ ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಪುತ್ತೂರು ವಿಭಾಗ ಹಾಗೂ ಹಾಸನ ವಿಭಾಗ ಜಂಟಿಯಾಗಿ ಆಯೋಜಿಸಿದ್ದವು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಅಂಕುಷ್ ಭಗತ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಜಮ್ಮು ವಿಭಾಗ, ಡಾ. ಏಂಜಲ್ ರಾಜ್ (ಐ.ಪಿ.ಓ.ಎಸ್.) ಹಿರಿಯ ಅಂಚೆ ಅಧೀಕ್ಷಕರು ಪುತ್ತೂರು ಅಂಚೆ ವಿಭಾಗ ಪುತ್ತೂರು ಭಾಗವಹಿಸಿದ್ದರು. ಔದ್ಯೋಗಿಕ ಸ್ಥಳದಲ್ಲಿ ವೈಯಕ್ತಿಕ ಅರಿವಿಲ್ಲದೇ ಕರ್ತವ್ಯಪಾಲಿಸುತ್ತಿರುವ ಸಹೋದ್ಯೋಗಿ ಬಾಂಧವರ ಆರೋಗ್ಯವರ್ಧನೆಗೋಸ್ಕರ ತೆಗೆದುಕೊಳ್ಳ … Read more

ಅಂಚೆ ಕಚೇರಿಯಲ್ಲಿ ಹೂಡಿಕೆ. ಭವಿಷ್ಯಕ್ಕೆ ಸಹಕಾರ ಹಾಗೂ ತೆರಿಗೆಯಲ್ಲಿ ಉಳಿತಾಯ

png 20230216 184054 0000 min

ಪುತ್ತೂರು:ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ನಮ್ಮ ಸುತ್ತಮುತ್ತ ಇಲಾಖೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೇವೆಯನ್ನು ಮನೆಯ ಬಾಗಿಲಿನ ವರೆಗೆ ಕೊಂಡೊಯ್ಯುವವ ಪ್ರಾಯಶಃ ಅಂಚೆಯಣ್ಣ ಮಾತ್ರ. “ಅಹರ್ನಿಶಾ ಸೇವಾ ಮಹೇ” ಎಂಬ ಧ್ಯೇಯ ವಾಕ್ಯದೊಂದಿಗೆ ಸಾರ್ವಜನಿಕ ಸೇವೆ ನೀಡುತ್ತಿರುವ ಅಂಚೆ ಇಲಾಖೆಯ ಪುತ್ತೂರು ವಿಭಾಗದಡಿಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಪ್ರಧಾನ / ಉಪ / ಶಾಖಾ ಅಂಚೆ ಕಛೇರಿಗಳಲ್ಲಿ ಕರ್ತವ್ಯ ನಿಭಾಯಿಸುತ್ತಿರುವ ಎಲ್ಲಾ ಅಂಚೆ ಬಟವಾಡೆದಾರರು ತಮ್ಮ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ. ಆದಾಯ ತೆರಿಗೆಯನ್ನು ಉಳಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಖಾತೆಗಳನ್ನು … Read more

ಜೈನ ತೀರ್ಥಂಕರರ ಮೋಕ್ಷ ಭೂಮಿಯ ಚಿತ್ರಿತ ಪೋಸ್ಟ್ ಕಾರ್ಡ್

png 20230216 181437 0000 min

ಪುತ್ತೂರು:ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗವು ಶ್ರೀ ಕ್ಷೇತ್ರ ವರಂಗ ಜೈನ್ ಮಠ ಇವರ ಸಹಯೋಗದೊಂದಿಗೆ “ಜೈನ ತೀರ್ಥಂಕರರ ಮೋಕ್ಷ ಭೂಮಿ” ಎಂಬ ಚಿತ್ರಿತ ಪೋಸ್ಟ್ ಕಾರ್ಡ್ ನ್ನು ದಿನಾಂಕ 24.01.2023 ರಂದು ಹಿರಿಯ ಅಂಚೆ ಅಧೀಕ್ಷಕರಾದ ಡಾ. ಏಂಜಲ್ ರಾಜ್ (ಐ.ಪಿ.ಒ.ಎಸ್) ಇವರ ಮೂಲಕ ಅನಾವರಣಗೊಳಿಸಿತು.ಈ ಚಿತ್ರಿತ ಪೋಸ್ಟ್ ಕಾರ್ಡುಗಳು ಜೈನ ಧರ್ಮದ ಎಲ್ಲಾ 24 ಜೈನ ತೀರ್ಥಂಕರರ ಹೆಸರನ್ನು ಹೊಂದಿದ್ದು, ಅವರು ಮೋಕ್ಷಹೊಂದಿದ ಸ್ಥಳದ ಚಿತ್ರವನ್ನೊಳಗೊಂಡಿದೆ. ಈ ಅಂಚೆ ಕಾರ್ಡಿನಲ್ಲಿ ಕ್ಯೂ ಆರ್ ಕೋಡ್ … Read more