ಪುತ್ತೂರು ಅಂಚೆ ವಿಭಾಗದ ತ್ರೈಮಾಸಿಕ ಅಂಚೆ ಅದಾಲತ್

ಭಾರತೀಯ ಅಂಚೆ ಇಲಾಖೆ ಅಂಚೆ ಅದಾಲತ್

       ಪುತ್ತೂರು  ಅಂಚೆ   ವಿಭಾಗದ  ತ್ರೈಮಾಸಿಕ  ಅಂಚೆ  ಅದಾಲತ್ ದಿನಾಂಕ  02.12.2022 ರಂದು  ಮಧ್ಯಾಹ್ನ 03 p.m. ಗೆ   ಪುತ್ತೂರು    ಅಂಚೆ  ವಿಭಾಗದ   ಹಿರಿಯ  ಅಂಚೆ  ಅದ್ಧೀಕ್ಷಕರ  ಕಚೇರಿಯಲ್ಲಿ  ನಡೆಯಲಿದೆ.

       ಈ ಅದಾಲತ್ತಿನಲ್ಲಿ , ಪುತ್ತೂರು , ಕಡಬ  , ಸುಳ್ಯ  ,ಬಂಟ್ವಾಳ  , ಮೂಡಬಿದ್ರೆ  , ಬೆಳ್ತಂಗಡಿ  , ಕಾರ್ಕಳ  ಹಾಗೂ  ಹೆಬ್ರಿ  ತಾಲೂಕುಗಳ   ವ್ಯಾಪ್ತಿಯ   ಅಂಚೆ  ಸೇವೆಗೆ   ಸಂಬಂಧಪಟ್ಟ  ಎಲ್ಲಾ  ರೀತಿಯ  ಸಾರ್ವಜನಿಕ  ಕುಂದು  ಕೊರತೆಗಳನ್ನು  , ತಕರಾರುಗಳನ್ನು  ಪರಶೀಲಿಸಲಾಗುವುದು.  

     ಸಾರ್ವಜನಿಕರು  ಪುತ್ತೂರು  ವಿಭಾಗಕ್ಕೆ  ಸಂಬಂಧಪಟ್ಟ  ದೂರುಗಳನ್ನು   ಪತ್ರಮುಖೇನ  , ಅಂಚೆ  ಅದಾಲತ್  ತಲೆಬರಹದಡಿ 02.12.2022 ರೊಳಗೆ  ಹಿರಿಯ   ಅಂಚೆ  ಅಧೀಕ್ಷಕರು , ಪುತ್ತೂರು ವಿಭಾಗ  , ಪುತ್ತೂರು  -574201,   ವಿಳಾಸಕ್ಕೆ  ದೂರುಗಳನ್ನು  ಕಳುಹಿಸಬಹುದು  , ಹಾಗೆಯೇ   ಅದೇ  ದಿನ  ಗಂಟೆ   03 p.m.   ಓಳಗೆ ದೂರವಾಣಿ  ಸಂಖ್ಯೆ  08251-230201,230295 ಕ್ಕೆ  ನೇರವಾಗಿಯೂ   ಸಂಪರ್ಕಿಸಬಹುದು.  ತಮ್ಮ  ದೂ ರುಗಳನ್ನು   ಮಿಂಚಂಚೆ doputtur.ka@indiapost.gov.in  ಮೂಲಕ   ಕಳುಹಿಸುವುದು.  ಪುತ್ತೂರು   ಅಂಚೆ  ವಿಭಾಗಕ್ಕೆ  ಸಂಬಂಧಿಸಿದ  ದೂರುಗಳನ್ನು    ಮಾತ್ರ  ಪರಿಗಣಿಸಲಾಗುವುದು.

Leave a Comment